Monday, 19 December 2016

ಮಾಮ್ ಗೆ ಇಂದು ಎರಡನೇ ಜನ್ಮದಿನದ ಸಂಭ್ರಮ....

ಎಲ್ಲ ಸ್ನೇಹಿತರಿಗೆ ನಮಸ್ಕಾರ...
ಹಾಗೂ ಮಾಮ್ ನ ಎರಡನೇ ಜನ್ಮದಿನದ ಶುಭಾಶಯಗಳು...


ಸರಿಯಾಗಿ ಎರಡು ವರ್ಷಗಳ ಹಿಂದೆ, ಅಂದರೆ 2014 ಡಿ.20ರಂದು ಮಂಗಳೂರು ವಿ.ವಿ. ಮಂಗಳಗಂಗೋತ್ರಿಯ ಕ್ಯಾಂಪಸಿನಲ್ಲಿ ಮಂಗಳೂರು ವಿ.ವಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ 25ನೇ ವರ್ಷದ ಸಂಭ್ರಮದ ಪ್ರಯುಕ್ತ ಎಂಸಿಜೆ ಅಲ್ಯೂಮ್ನಿಗಳ ಗೆಟ್ ಟುಗೆದರ್ ಹಮ್ಮಿಕೊಳ್ಳಲಾಗಿತ್ತು. ಕಳೆದ 25 ವರ್ಷಗಳ ವಿವಿಧ ಬ್ಯಾಚುಗಳ ಸುಮಾರು 50ಕ್ಕೂ ಹೆಚ್ಚು ಮಂದಿ ಹಳೆ ವಿದ್ಯಾರ್ಥಿಗಳು, ಆಗಿನ ವಿದ್ಯಾರ್ಥಿಗಳು, ಪತ್ರಿಕೋದ್ಯಮ ಕಲಿಸಿದ ಉಪನ್ಯಾಸಕರು, ವಿ.ವಿ. ಅಧಿಕಾರಿಗಳು ಆ ಸಮಾರಂಭದಲ್ಲಿ ಪಾಲ್ಗೊಂಡು ವಿಭಾಗದ ಬೆಳ್ಳಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದರು.

ಅದೇ ದಿನ ಮಧ್ಯಾಹ್ನ ನಡೆದ ಸಭೆಯಲ್ಲಿ ನಮ್ಮ ಈಗಿನ ಮೀಡಿಯಾ ಆಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (ಮಾಮ್) ಸಂಸ್ಥೆ ಹುಟ್ಟಿಕೊಂಡಿತು. ವೇಣು ಶರ್ಮ ಅವರ ನೇತೃತ್ವದಲ್ಲಿ ಮೊದಲ ಕಾರ್ಯಕಾರಿ ಸಮಿತಿ ರಚನೆಯಾಯಿತು. ಬಳಿಕ 2015ರಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಫ್ಲೋರಿನ್ ರೋಚ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದು. ಪ್ರಸ್ತುತ ಅವರ ನೇತೃತ್ವದ ಪದಾಧಿಕಾರಿಗಳ ಸಮಿತಿ ಮಾಮ್ ನ್ನು ಮುನ್ನಡೆಸುತ್ತಿದೆ. ಹಾಗಾಗಿ ಇಂದು ನಮ್ಮ ಸಂಘಟನೆಗೆ ಎರಡರ ಹರೆಯ...

ಮೊತ್ತಮೊದಲಾಗಿ ಹಳೆ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸುವುದೇ ನಮ್ಮೆದುರಿಗಿರುವ ಸವಾಲಾಗಿತ್ತು. ಆದಕ್ಕಾಗಿ ಈ ವಾಟ್ಸಪ್ ಗ್ರೂಪನ್ನು ಹುಟ್ಟುಹಾಕಲಾಯಿತು. ಮಾಮ್ ಆಕ್ಟಿವ್, ಮಾಮ್ ಸೈಲೆಂಟ್, ಮಾಮ್ ಚಾಟ್, ಮಾಮ್ ಬೆಂಗಳೂರು ಚಾಪ್ಟರ್ ಹೆಸರಿನ ನಾಲ್ಕು ಪ್ರಧಾನ ಗುಂಪುಗಳಲ್ಲಿ ನಮ್ಮ ಹಳೆ ವಿದ್ಯಾರ್ಥಿಗಳನ್ನು ಸೇರಿಸುವ ಪ್ರಯತ್ನ ಮಾಡಿದ್ದು, ಎಲ್ಲರನ್ನೂ ಸೌಹಾರ್ದಯುತವಾಗಿ ಸೇರಿಸಿ ಮುಂದೆ ಕರೆದೊಯ್ಯುವ ಪ್ರಯತ್ನ ಇಂದಿಗೂ ಸಾಗಿದೆ. ಜೊತೆಗೆ ಮಾಮ್ ಕಾರ್ಯಕಾರಿ ಸಮಿತ ತನ್ನದೇ ಆದ ವರ್ಕಿಂಗ್ ಕಮಿಟಿ ಹೆಸರಿನ ಪ್ರತ್ಯೇಕ ಗ್ರೂಪ್ ಹೊಂದಿದ್ದು, ಕಾರ್ಯಚಟುವಟಿಕೆಗಳ ಕುರಿತು ಅಭಿಪ್ರಾಯ ವಿನಿಮಯ ಮಾಡಿಕೊಳ್ಳುತ್ತಿದೆ.


ಹಳೆ ವಿದ್ಯಾರ್ಥಿಗಳ ಸಂಘಟನೆ, ಮಾಧ್ಯಮ ಸಂಬಂಧಿ ವಿಚಾರಗಳ ಕುರಿತ ಅವಲೋಕನ, ತರಬೇತಿ, ಪ್ರಕಾಶನ ಇತ್ಯಾದಿ ಹಲವು ಉದ್ದೇಶಗಳೊಂದಿಗೆ ಮಾಮ್ ಆರಂಭವಾಗಿದ್ದು, ಇನ್ನೂ ಬೆಳವಣಿಗೆ ಹಂತದಲ್ಲಿದೆ. ನಮ್ಮ ಸಂಸ್ಥೆ ರಿಜಿಸ್ಟ್ರರ್ಡ್ ಆಗಿದೆ, ಸ್ವಂತ ಬ್ಯಾಂಕ್ ಖಾತೆ ಹೊಂದಿದೆ, ಲೆಕ್ಕಪರಿಶೋಧನೆ ಕಳೆದ ವಾರ್ಷಿಕ ಮಹಾಸಭೆ ವೇಳೆ ನಡೆದಿದೆ. ಸುಮಾರು 150ಕ್ಕೂ ಅಧಿಕ ಹಳೆ ವಿದ್ಯಾರ್ಥಿಗಳು ನಮ್ಮ ಸಂಪರ್ಕದಲ್ಲಿದ್ದು ಸುಮಾರು 40ರಷ್ಟು ಮಂದಿ ಅಧಿಕೃತವಾಗಿ ಚಂದಾ ಕಟ್ಟಿ ಸದಸ್ಯರಾದವರಿದ್ದಾರೆ.

ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಅವರನ್ನು ಅಭಿನಂದಿಸುವ ಮನೋಭಿನಂದನ ಕಾರ್ಯಕ್ರಮ 2015 ಏಪ್ರಿಲ್ ನಲ್ಲಿ ನಡೆದಿದ್ದು, ಅದೇ ಸಂದರ್ಭದಲ್ಲಿ ಮಾಮ್ ವತಿಯಿಂದಲೇ ಅಚ್ಚುಕಟ್ಟಾದ ಅಭಿನಂದನಾ ಗ್ರಂಥವನ್ನೂ ಪ್ರಕಟಿಸಿದ್ದು ನಮ್ಮ ಹೆಗ್ಗಳಿಕೆ. ಬಳಿಕ ಸರಣಿ ರಕ್ತದಾನ ಶಿಬಿರಗಳನ್ನು ರೆಡ್ ಕ್ರಾಸ್ ಸೊಸೈಟಿ ಜೊತೆ ಸೇರಿ ನಡೆಸಿರುವುದು ನಮಗೆ ಸಾರ್ಥಕತೆ ತಂದ ವಿಚಾರ.

ಬಳಿಕ ಮಂಗಳೂರು ಪರಿಸರದಲ್ಲಿ ವಿವಿಧ ಮಾಧ್ಯಮ ಸಂಬಂಧಿ ಕಾರ್ಯಾಗಾರಗಳಲ್ಲಿ ನಮ್ಮ ಸದಸ್ಯರು ಪಾಲ್ಗೊಂಡು ಸಂಪನ್ಮೂಲ ವ್ಯಕ್ತಿಗಳಾಗಿ ಅಭಿಪ್ರಾಯ ವಿನಿಮಯ ಮಾಡಿಕೊಂಡಿದ್ದಾರೆ. ಮಾಮ್ ವತಿಯಿಂದ ಕಳೆದ ವರ್ಷ ಕಿರು ಪ್ರವಾಸವನ್ನೂ ಹಮ್ಮಿಕೊಳ್ಳಲಾಗಿತ್ತು...

ಮಾಮ್ ನ ಬಹುನಿರೀಕ್ಷಿತ ಮಾಮ್ ಇನ್ ಸ್ಪೈರ್ ಅವಾರ್ಡ್ ನ್ನು 2016ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಘೋಷಿಸಿದ್ದು, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ರು.5000 ಮೌಲ್ಯದ ನಗದು ಸಹಿತ ಪುರಸ್ಕಾರ ಇದಾಗಿದ್ದು, ಈಗಾಗಲೇ ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳಿಗೆ ಪ್ರಶಸ್ತಿಯ ಕುರಿತು ಸೂಚನೆಗಳನ್ನು ಕಳುಹಿಸಲಾಗಿದೆ. ಮಾಧ್ಯಮ ಪ್ರಕಟಣೆಯನ್ನೂ ನೀಡಲಾಗಿದೆ. ಶರತ್ ಹೆಗ್ಡೆ ನೇತೃತ್ವದ ಸಮಿತಿ ಇದರ ಉಸ್ತುವಾರಿ ಹೊತ್ತಿದೆ.

ಮಾಮ್ ನ ಮಹತ್ವಾಕಾಂಕ್ಷೆಯ ವೆಬ್ ಸೈಟ್ ಆರಂಭದ ಕೆಲಸ ಬಹುತೇಕ ಪೂರ್ಣಗೊಂಡಿದ್ದು, ಲೋಕಾರ್ಪಣೆಯಷ್ಟೇ ಬಾಕಿ ಉಳಿದಿದೆ. ಡಾ. ರೊನಾಲ್ಡ್ ಅನಿಲ್ ಫರ್ನಾಂಡಿಸ್ ನೇತೃತ್ವದ ಸಮಿತಿ ವೆಬ್ ಸೈಟ್ ರಚನೆಯ ಉಸ್ತುವಾರಿ ನಡೆಸುತ್ತಿದೆ.

ಹಳೆ ವಿದ್ಯಾರ್ಥಿಗಳ ಸಮ್ಮಿಲನ, ಮಾಮ್ ಸಹಯೋಗದ ಕಾರ್ಯಾಗಾರ ಮತ್ತಿತರ ಉದ್ದೇಶಿತ ಕಾರ್ಯಕ್ರಮಗಳು ಭವಿಷ್ಯದಲ್ಲಿ ನಡೆಯಲಿದ್ದು, ನಿಮ್ಮೆಲ್ಲರ ಸಹಕಾರ ಅತ್ಯಂತ ಅಗತ್ಯ. ನಾವು ನಮ್ಮ ಸಂಘಟನೆಯ ಹೆಸರಿಗೆ ಪೂರಕವಾಗಿ, ಉದ್ದೇಶಕ್ಕೆ ಪೂರಕವಾಗಿ ಕೆಲಸ ಮಾಡುತ್ತಾ ಸಂಸ್ಥೆಯನ್ನು ಬಲಿಷ್ಠವಾಗಿ ಕಟ್ಟಬೇಕಾಗಿದೆ. ನಮ್ಮದೊಂದು ಮಾಧ್ಯಮ ಸಹಯೋಗಿ ಸಂಘಟನೆ. ನಮ್ಮ ಬಳಗದಲ್ಲಾಗಲೀ, ವಾಟ್ಸಪ್ ಗ್ರೂಪುಗಳಲ್ಲಾಗಲಿ ಅನಗತ್ಯ ವಿಚಾರಗಳಿಗೋಸ್ಕರ, ಅಪ್ರಸ್ತುತ ವಿಚಾರಗಳಿಗೋಸ್ಕರ ಚರ್ಚೆ, ಕಾಲಹರಣ ಮಾಡುವುದಕ್ಕಿಂತ ಸಂಘಟನೆಯನ್ನು ಹೇಗೆ ಕಟ್ಟಬಹುದು. ಅದರಲ್ಲಿ ಪ್ರತಿಯೊಬ್ಬರ ಸಹಯೋಗ ಹೇಗಿರಬಹುದು ಎಂದು ಚಿಂತಿಸುವ ಮೂಲಕ ಮಾಮ್ ನ ಹೆಸರನ್ನು ಚಿರಸ್ಥಾಯಿಯಾಗಿಸುವಲ್ಲಿ ಎಲ್ಲರ ಸಹಯೋಗ ಅಪೇಕ್ಷಿಸುತ್ತೇನೆ.

-ಕೃಷ್ಣಮೋಹನ, ಪ್ರಧಾನ ಕಾರ್ಯದರ್ಶಿ, ಮಾಮ್.


2014 ಡಿಸೆಂಬರ್ 20ರಂದು ಮಾಮ್ ಹುಟ್ಟಿದ ದಿನದ ಸಂಭ್ರಮವನ್ನು ಮೆಲುಕು ಹಾಕಲು ಈ ಲಿಂಕ್ ಕ್ಲಿಕ್ ಮಾಡಿ...

http://maammangalore.blogspot.in/search?updated-min=2014-01-01T00:00:00-08:00&updated-max=2014-12-27T03:59:00-08:00&max-results=26&start=1&by-date=false



-------------
ನಮ್ಮೆಲ್ಲಾ ಚಟುವಟಿಕೆಗಳ ಪುನರಾವಲೋಕನಕ್ಕೆ ನಮ್ಮ ಬ್ಲಾಗ್ maammangalore.blogspot.in ಪುಟಗಳನ್ನು ತಿರುವಿ.

Sunday, 18 September 2016

MAAM OFFICE BEARERS (2015-17)
























1)      Florine Roche –President  (9880810329)
     Programme Executive in All India Radio Mangaluru 

2)      Venu Sharma –Hon. President (9620959900)
    Founder & CEO of Add-Idea Consulting  & Founder &     Chairman of Idea-Now Publicity LLP in Bangalore, Mangalore. Working as an outsourced External CEO - an unique model in the industry

3)      Krishnamohana T- General Secretary (9481976969)
     (Senior Sub editor In Kannadaprabha at Mangaluru)

4)      Dr.Ronald Anil Fernandes –Vice President  (9448480323)
     (Beauro Chief, Deccan Herald, Mangaluru)

Sharath Hegde Kadthala –Vice President  (99646770010)
(District correspondant in Prajavani at Koppala)

Deepak NaikVice president (8095921921)
SLK Global solutions PVT limited Project Manager at Bengaluru.

5)      Smitha Shenoy –Treaserur (9341881930)
     (Journalism Lecturer in Besant College Mangaluru

6)      Venu vinod K S –Secretary (9448386876)
     (Chief reporter in Vijayvani at Mangaluru)

   Yogish Holla –Secretary (9448500007)
   (Chief Copy editor in VIjayKarnataka at Mangaluru

  Navin Ammembala-Secretary (9449588440)
  (Bfirst .in Chief, Bengaluru)

7)      Krishnakishore-Programme co-ordinator (9448424922)
    (Photography/Self Employed)

Executive Members:
1)      Surendra Shetty-Beauro Chief,  KannadaPrabha at           Mangaluru
2)      A.V. Balakrishna Holla-Editor, Udayavani Manipal
3)      Raviprasad Kamila-Beauro Chief, The Hindu at   Mangaluru
4)      Prashanth Rai- Entrepreneur in the Area Of communication (Creative consultant to Colors Kannada)
5)      Suprabha N K-Chief Editor, Kannadaprabha at Bengaluru
6)      Suresh D palli-Reporter in Hosadigantha at Mangaluru
7)      Harish Kulkunda-Reporter, VIjayvani at Mangaluru
8)      Harish Motukana- Reporter, VIjayvani at Mangaluru
9)      Shravan Kumar Nala- Reporter, VIjayvani at Mangaluru
10)   Vidya Irvattur-Sub Editor in Udayavani at Manipal.

Sunday, 28 August 2016

ಮಾಮ್ ಎರಡನೇ ವಾರ್ಷಿಕ ಮಹಾಸಭೆ (20.08.2016)ಯ ನಿರ್ಣಯಗಳ ವರದಿ



ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (ಮಾಮ್)ಇದರ ಎರಡನೇ ವಾರ್ಷಿಕ ಮಹಾಸಭೆ (ಎಜಿಎಂ) ದಿನಾಂಕ 20.08.2016ರಂದು ಮಂಗಳೂರಿನ ಬಿಜೈ ಆಡ್ ಐಡಿಯಾ ಕಚೇರಿಯಲ್ಲಿ ನಡೆಯಿತು.


ಎಜಿಎಂ ಅಜೆಂಡಾಗಳು

1) ಸ್ವಾಗತ
2) ವರದಿ ವಾಚನ
3) ಮಾಮ್ ಲೆಕ್ಕಪತ್ರ ಮಂಡನೆ
4) ಮಾಮ್ ಮುಂದಿನ ಕಾರ್ಯಚಟುವಟಿಕೆಗಳ ಕುರಿತು ಸಮಾಲೋಚನೆ
5) ಅಧ್ಯಕ್ಷರ ಅನುಮತಿ ಮೇರೆಗೆ ಇತರ ವಿಚಾರಗಳು

ಎಜಿಎಂ ನಡಾವಳಿಗಳು:

1) ಮಾಮ್ ಕಾರ್ಯದರ್ಶಿ ವೇಣು ವಿನೋದ್ ಕೆ.ಎಸ್. ಅವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.

2) ಮಾಮ್ ಅಧ್ಯಕ್ಷೆ ಫ್ಲೋರಿನ್ ರೋಚ್ ಅವರು ಮಾಮ್ ಸ್ಥಾಪನೆ ಆರಂಭವಾದಂದಿನಿಂದ ಈ ವರೆಗಿನ ಕಾರ್ಯಚಟುವಟಿಕೆಗಳ ಕುರಿತು ಸಂಕ್ಷಿಪ್ತ ವರದಿ ಮಂಡನೆ ಮಾಡಿದರು.

3) ಬಳಿಕ ಮಾಮ್ ಕೋಶಾಧಿಕಾರಿ ಸ್ಮಿತಾ ಶೆಣೈ ಅವರು ಮಾಮ್ ಆರಂಭವಾದಾಗಿನಿಂದ ಈ ವರೆಗಿನ ಲೆಕ್ಕಪತ್ರ (ಬ್ಯಾಲೆನ್ಸ್ ಶೀಟ್) ಮಂಡಿಸಿದರು. ಮಾಮ್ ಸ್ಥಾಪನೆ ಆದ ಬಳಿಕ ಮೊದಲ ಬಾರಿಗೆ ಲೆಕ್ಕಪರಿಶೋಧಕರ ಮೂಲಕ ಮಾಮ್ ಬ್ಯಾಲೆನ್ಸ್ ಶೀಟ್ ಸಿದ್ಧಪಡಿಸಿದ್ದು ಈ ಆಯವ್ಯಯಕ್ಕೆ ಧ್ವನಿಮತದ ಮೂಲಕ ಸದಸ್ಯರು ಅಂಗೀಕಾರ ಸೂಚಿಸಿದರು.
ಲೆಕ್ಕ ಪತ್ರ ಮಂಡನೆ ಬಳಿಕ ಈ ಕೆಳಗಿನ ನಿರ್ಧಾರಗಳನ್ನು ಕೈಗೊಳ್ಳಲಾಯಿತು:

a) ಇನ್ನು ಮುಂದೆ ಮಾಮ್ ಚಟುವಟಿಕೆಗಳ ಎಲ್ಲಾ ಪಾವತಿ ಬ್ಯಾಂಕ್ ಮೂಲಕವನೇ ನಡೆಯುತ್ತದೆ. ಆದರೆ, ಕೋಶಾಧಿಕಾರಿ ತಮ್ಮ ಬಳಿ ರುಪಾಯಿ 5000 ವರೆಗೆ ಪೆಟ್ಟಿ ಕ್ಯಾಶ್ ಇರಿಸಿಕೊಂಡು ಚಿಲ್ಲರೆ ಪಾವತಿಗಳನ್ನು (ರು.1000 ವರೆಗಿನದ್ದು) ಮಾಡಬಹುದು.


b) ರು.1000ಕ್ಕಿಂತ ಮೇಲಿನ ಎಲ್ಲಾ ಪಾವತಿಗಳನ್ನು ಚೆಕ್ ಮುಖಾಂತರವೇ ಮಾಡುವುದು.

c) ಮಾಮ್ ಬ್ಯಾಲೆನ್ಸ್ ಶೀಟ್ ಸಿದ್ಧಪಡಿಸಿದ (ಎರಡು ವರ್ಷದ್ದು) ಲೆಕ್ಕ ಪರಿಶೋಧಕರಿಗೆ (ಸಿಎ) ರು.3000 ಫೀಸ್ ಪಾವತಿಸಲು ಸಭೆ ಅಂಗೀಕರಿಸಿತು.

d) ಮಾಮ್ ಸದಸ್ಯ ಶುಲ್ಕ ಹಾಗೂ ಸದಸ್ಯತ್ವ ನವೀಕರಣ ಶುಲ್ಕವನ್ನು ಯಾವುದೇ ಖರ್ಚುಗಳಿಗೆ ಬಳಸುವಂತಿಲ್ಲ. ಆ ದುಡ್ಡನ್ನು ಫಿಕ್ಸೆಡ್ ಡೆಪಾಸಿಟ್ ಆಗಿ ನಮ್ಮ ಬ್ಯಾಂಕಿನಲ್ಲಿ ಇರಿಸಿ ಅದರ ಬಡ್ಡಿಯ ಹಣವನ್ನು ಮಾತ್ರ ಖರ್ಚಿಗೆ ಬಳಸುವುದು.

4) ಮಂಗಳೂರು ವಿ.ವಿ. ಎಂಸಿಜೆ ವಿಭಾಗದಲ್ಲಿ ವ್ಯಾಸಂಗ ಮಾಡಿದ 1988ರ ನಂತರದ ಲಭ್ಯವಿರುವ ಎಲ್ಲ ಹಳೆ ವಿದ್ಯಾರ್ಥಿಗಳ ಪಟ್ಟಿ ಹಾಗೂ ಸಂಪರ್ಕ ಸಂಖ್ಯೆಗಳು ಹಾಗೂ ವಿಳಾಸವನ್ನು ವಿಭಾಗ ಮುಖ್ಯಸ್ಥರ ಸಹಾಯದಿಂದ ಸಂಗ್ರಹಿಸುವುದು. ಆಯಾ ಬ್ಯಾಚ್ ಪ್ರಕಾರ ಹಳೆ ವಿದ್ಯಾರ್ಥಿಗಳ ಪಟ್ಟಿ ತಯಾರಿಸಿ ಅದನ್ನು ನಮ್ಮ ನೂತನ ವೆಬ್ ಸೈಟಿನಲ್ಲಿ ಪ್ರಕಟಿಸುವುದು. ಈ ಜವಾಬ್ದಾರಿಯನ್ನು ವಸಂತ್ ಕೊಣಾಜೆ ಹಾಗೂ ಕೃಷ್ಣ ಕಿಶೋರ್ ಅವರಿಗೆ ವಹಿಸಲಾಯಿತು.

ಮಂಗಳೂರು ಮತ್ತು ಬೆಂಗಳೂರು ಸಹಿತ ವಿವಿಧೆಡೆ ಮಾಧ್ಯಮ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಎಂಸಿಜೆ ಹಳೆ ವಿದ್ಯಾರ್ಥಿಗಳ ಪಟ್ಟಿಯನ್ನು ಪ್ರತ್ಯೇಕವಾಗಿ ಸಿದ್ಧಪಡಿಸಿ ಅವರನ್ನು ಮಾಮ್ ಅಧಿಕೃತ ಸದಸ್ಯರನ್ನಾಗಿಸುವ ಪ್ರಯತ್ನ ಮಾಡುವುದು.


5) ಉಜಿರೆ ಎಸ್ ಡಿಎಂ ಕಾಲೇಜಿನ ಸುವರ್ಣ ಮಹೋತ್ಸವ ಹಾಗೂ ಪತ್ರಿಕೋದ್ಯಮ ವಿಭಾಗದ 30ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಸರಣಿ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ಮಾತುಕತೆ ಮುಂದುವರಿಸುವ ಹೊಣೆಯನ್ನು ಬಾಲಕೃಷ್ಣ ಹೊಳ್ಳ ಅವರಿಗೆ ವಹಿಸಲಾಯಿತು.

6) ಮಾಮ್ ಮಂಗಳೂರಿನ ಎಸ್ ಸಿಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ಇರಿಸಿದ 1 ಲಕ್ಷ ರುಪಾಯಿ ಫಿಕ್ಸೆಡ್ ಡೆಪಾಸಿಟ್ ನ ಬಡ್ಡಿ ಹಣದಿಂದ ನೀಡುವ ವಾರ್ಷಿಕ ದತ್ತಿನಿಧಿ ಪ್ರಶಸ್ತಿಗೆ ಮಾಮ್ ಇನ್ ಸ್ಪೈರ್ ಅವಾರ್ಡ್ ಎಂದು ಹೆಸರಿಸಲು ನಿರ್ಧರಿಸಲಾಯಿತು. ಉಪಾಧ್ಯಕ್ಷ ಶರತ್ ಹೆಗ್ಡೆ ಅವರು ದತ್ತಿನಿಧಿ ಮಾರ್ಗಸೂಚಿಗಳ ಕರಡು ಪ್ರತಿಯನ್ನು ಸಭೆಯಲ್ಲಿ ಮಂಡಿಸಿದರು. ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಸಭೆ ಕರಡುಪ್ರತಿಗೆ ಅನುಮೋದನೆ ನೀಡಿತು. ದತ್ತಿನಿಧಿ ಕುರಿತು ಈ ಕೆಳಗಿನ ನಿರ್ದಾರಗಳನ್ನು ಕೈಗೊಳ್ಳಲಾಯಿತು:

a) ಪ್ರಾಯೋಜಕರ ಸಹಕಾರದಿಂದ ಮಂಗಳೂರು, ಕೊಡಗು, ಉಡುಪಿ ಭಾಗದ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ (ಯಾವುದೇ ಪದವಿ) ಒಂದು ಹಾಗೂ ಮಂಗಳೂರು ವಿ.ವಿ. ಸಹಿತ ಪತ್ರಿಕೋದ್ಯಮ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಇನ್ನೊಂದು ನಗದು ಪ್ರಶಸ್ತಿ ನೀಡುವುದು.

b) ದತ್ತಿನಿಧಿ ಕುರಿತ ಎಲ್ಲಾ ನಿರ್ಧಾರಗಳನ್ನು ಕೈಗೊಳ್ಳುವ ಅಧಿಕಾರವನ್ನು ಶರತ್ ಹೆಗ್ಡೆ ನೇತೃತ್ವದ ದತ್ತಿನಿಧಿ ಕಾರ್ಯಕಾರಿ ಸಮಿತಿಗೆ ನೀಡಲು ಸಭೆ ನಿರ್ಣಯಿಸಿತು.


7) ಮಂಗಳೂರಿನ ಬೆಸೆಂಟ್ ಕಾಲೇಜಿನ ಸಹಯೋಗದಲ್ಲಿ ನಡೆಸಲು ಉದ್ದೇಶಿಸಿರುವ ಆಟೋ ಚಾಲಕರಿಗೆ ಮಾಧ್ಯಮ ತರಬೇತಿ ಕಾರ್ಯಾಗಾರಕ್ಕೆ ತಗಲಬಹುದಾದ ಅಂದಾಜು ವೆಚ್ಚ ರು.3000ವನ್ನು ಮಾಮ್ ಭರಿಸುವ ತೀರ್ಮಾನ ಕೈಗೊಳ್ಳಲಾಯಿತು. ಸಾಧ್ಯವಾದರೆ ಪ್ರೆಸ್ ಕ್ಲಬ್ ಸಹಾಯ ಪಡೆಯಲು ನಿರ್ಧರಿಸಲಾಯಿತು. ಇದರೊಂದಿಗೆ ಮಂಗಳೂರಿನ ಮಹಾಲಸಾ ಕಲಾ ಕಾಲೇಜು ಮತ್ತು ಮಾಮ್ ಸಹಯೋಗದಲ್ಲಿ ನಡೆಸಲು ಉದ್ದೇಶಿಸಿದ ಜಂಟಿ ಕಾರ್ಯಕ್ರಮಕ್ಕೆ (ಕಲಾಕೃತಿ ರಚನೆ ಹಿನ್ನೆಲೆಯಲ್ಲಿ) ಸುಮಾರು 5000 ರು. ಖರ್ಚು ಮಾಮ್ ವಹಿಸಲು ತೀರ್ಮಾನಿಸಲಾಯಿತು.

8) ಮಂಗಳಾ ಅಲ್ಯೂಮ್ನಿ ಅಸೋಸಿಯೇಶನ್ (ಮಾ) ಸಹಯೋಗದಲ್ಲಿ ಮಂಗಳೂರು ವಿ.ವಿ. ಹಳೆ ವಿದ್ಯಾರ್ಥಿಗಳ ಬೃಹತ್ ಗೆಟ್ ಟುಗೆದರ್ ಮಾಡುವುದಾದರೆ ಮಾಮ್ ಸಹಯೋಗ ನೀಡಲು ಮಾ ಪದಾಧಿಕಾರಿಗಳೊಂದಿಗೆ ಚರ್ಚಿಸಲು ನಿರ್ಧರಿಸಲಾಯಿತು

9) ಮಾಮ್ ಬೆಂಗಳೂರು ಘಟಕದ ಸದಸ್ಯರನ್ನು ಒಟ್ಟು ಸೇರಿಸುವ ಮತ್ತು ಸದಸ್ಯತ್ವ ಅಭಿಯಾನವನ್ನು ನಡೆಸುವ ಸಹಯೋಗ ನೀಡುವ ಜವಾಬ್ದಾರಿಯನ್ನು ಉಪಾಧ್ಯಕ್ಷ ದೀಪಕ್ ನಾಯ್ಕ್ ಅವರಿಗೆ ನೀಡಲಾಯಿತು.

10) ಎಂಸಿಜೆ ವಿಭಾಗ ಸಹಯೋಗದಲ್ಲಿ ಎಂಸಿಜೆ ವಿದ್ಯಾರ್ಥಿಗಳಿಗಾಗಿ ಪ್ರತಿ ತಿಂಗಳು ಮಾಮ್ ಸಂಪನ್ಮೂಲ ವ್ಯಕ್ತಿಗಳು ನಿಯಮಿತ ಪ್ರಾಕ್ಟಿಕಲ್ ತರಗತಿಗಳನ್ನು ನಡೆಸಲು ವಿಭಾಗ ಪ್ರತಿನಿಧಿ ಪ್ರೊ.ಜಿ.ಪಿ.ಶಿವರಾಂ ಸಮ್ಮತಿಸಿದರು. ಇದಕ್ಕೋಸ್ಕರ ಮಾಮ್ ಸಂಪನ್ಮೂಲ ವ್ಯಕ್ತಿಗಳ ಪಟ್ಟಿಯನ್ನು ವಿಭಾಗಕ್ಕೆ ಕಳುಹಿಸಲು ತೀರ್ಮಾನಿಸಲಾಯಿತು.

11) ಕೋಶಾಧಿಕಾರಿ ಸ್ಮಿತಾ ಶೆಣೈ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಕೃಷ್ಣಮೋಹನ ಕಲಾಪ ನಿರ್ವಹಿಸಿದರು. ಎಂಸಿಜೆ ವಿಭಾಗ ಅಧ್ಯಕ್ಷರ ಪರವಾಗಿ ಪ್ರತಿನಿಧಿ ಪ್ರೊ.ಜಿ.ಪಿ.ಶಿವರಾಂ ಸೇರಿದಂತೆ 20 ಹಳೆ ವಿದ್ಯಾರ್ಥಿಗಳು ಪಾಲ್ಗೊಂಡರು.








Thursday, 25 August 2016

MAAM AGM coveraage in MEDIA

HOSA DIGANTHA

UDAYAVAANI

KANNADAPRABHA

VISHWA VAANI

DECCAN HERALD

SAMYUKTHA KARNATAKA

PRAJA VAANI

VARTHA BHARATHI

VIJAYAVAANI

THE HINDU
ದಿನಾಂಕ 20.08.2016 ಶನಿವಾರ ಮಂಗಳೂರಿನಲ್ಲಿ ನಡೆದ ವಾರ್ಷಿಕ ಮಹಾಸಭೆಯ ವರದಿಯ ತುಣುಕುಗಳು, ವಿವಿಧ ಪತ್ರಿಕೆಗಳಲ್ಲಿ ಕಂಡಂತೆ... (ಸಹಕಾರ ಸುರೇಶ್ ಡಿ.ಪಳ್ಳಿ)

MAAM MEMBERS LIST -REVISED (Till AUGUST 20th 2016)

List of Life Members for MAAM 
(Rs.1000/-.Paid till Aug-2016)

1) Ajith Kumar
2) Ambarish Bhat
3) Ashwani Kumar
4) Balakrishna Holla

5) Florine Roche
6) Gururaj Paniyadi
7) Halimath Sadiya
8) Ishwarachandra
9) Kabeeer Khantila
10) Krishna Mohana T.
11) Krishna Kishore
 12) Navitha Jain
13)  PraveenChandra
14) Raffique Konaje
15) Ramachandra M.
16) Raviprakash.S
17) Ravipraksh Rai
18) Raviprasad Kamila
19) Sadashiva K
20) Shyma Prasad K.
21) Stanley Pinto
22) Sooryanarayana
23) Sukhesha Padibagilu
24) Suprabha N.K.
25) Surendra Shetty
26) Suresh D.Palli
27) Venu Sharma
28) Vivek Nambiar
29) Yogeesh Holla
30)  Mohana.
31) Dr.Ronald Anil Fernandes
32)  Smitha shenoy
33) Vasanth konaje
34) Chandrashekhar kulamaruva
35) Deepak Naik
36) Sharath hegde
-------------
Yearly Membership - Paying rs.100/-

(till August 2016)

1) Harish Motukana
2) Harish Kulkunda

Saturday, 20 August 2016

MAAM second AGM Report held on 20th AUGUST 2016


ಮಂಗಳೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿದ್ಯಾರ್ಥಿಗಳ ಹಳೆ ವಿದ್ಯಾರ್ಥಿಗಳ ಸಂಘ (ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ MAAM) ಇದರ ಎರಡನೇ ವಾರ್ಷಿಕ ಮಹಾಸಭೆ (AGM) ಶನಿವಾರ ಪೂರ್ವಾಹ್ನ ಮಂಗಳೂರಿನ ಬಿಜೈ ಆಡ್ ಐಡಿಯಾ ಕಚೇರಿಯಲ್ಲಿ ಸಂಪನ್ನಗೊಂಡಿತು.

-ಮಾಮ್ ಅಧ್ಯಕ್ಷೆ ಫ್ಲೋರಿನ್ ರೋಚ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
-ಮಂಗಳೂರು ವಿ.ವಿ. ಎಂಸಿಜೆ ವಿಭಾಗ ಪ್ರತಿನಿಧಿಯಾಗಿ ಪ್ರೊ.ಜಿ.ಪಿ.ಶಿವರಾಂ ಹಾಗೂ ಬೆಂಗಳೂರು ಘಟಕದ ಪ್ರತಿನಿಧಿಯಾಗಿ ದೀಪಕ್ ನಾಯ್ಕ್ ಪಾಲ್ಗೊಂಡಿದ್ದರು.
-ಇವರಲ್ಲದೆ ಮಾಮ್ ಕಾರ್ಯಕಾರಿ ಸಮಿತಿ ಹಾಗೂ ಇತರ ಸದಸ್ಯರು ಸೇರಿದಂತೆ 20 ಮಂದಿ ಸದಸ್ಯರು ಸಭೆಯಲ್ಲಿ ಹಾಜರಿದ್ದರು.


............................
-ಮಾಮ್ ಕಾರ್ಯದರ್ಶಿ ವೇಣು ವಿನೋದ್ ಸ್ವಾಗತಿಸಿದರು.
-ಅಧ್ಯಕ್ಷೆ ಫ್ಲೋರಿನ್ ರೋಚ್ ಕಳೆದ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು.
 (ಈ ವರದಿಯ ಪೂರ್ಣ ಪಾಠವನ್ನು ನೀವು ನಮ್ಮ ಬ್ಲಾಗಿನ ಈ ಹಿಂದಿನ ಪೋಸ್ಟಿನಲ್ಲಿ ನೋಡಬಹುದು)
2015-16 MAAM report in kannada uploaded in our blog:
please click following link:

http://maammangalore.blogspot.in/2016/08/maam-2015-16.html

 
-ಮಾಮ್ ಕೋಶಾಧಿಕಾರಿ ಸ್ಮಿತಾ ಶೆಣೈ ಅವರು ಮಾಮ್ ಆರಂಭವಾದಾಗಿನಿಂದ ಈ ವರೆಗಿನ ಲೆಕ್ಕಪತ್ರದ ವಿವರಗಳನ್ನು ಮಂಡಿಸಿದರು. ಆಡಿಟ್ ಆದ ಲೆಕ್ಕಪತ್ರಕ್ಕೆ ಸಭೆ ಅಂಗೀಕಾರ ಸೂಚಿಸುವ ನಿರ್ಣಯ ಕೈಗೊಂಡಿತು
 (ಈ ಲೆಕ್ಕಪತ್ರದ ಮುಖ್ಯಾಂಶಗಳನ್ನು ನಮ್ಮ ಬ್ಲಾಗಿನಲ್ಲಿ ಪ್ರಕಟಿಸಲಾಗುವುದು)
-ಪ್ರಧಾನ ಕಾರ್ಯದರ್ಶಿ ಕೃಷ್ಣಮೋಹನ ಕಲಾಪ ನಿರ್ವಹಿಸಿದರು.
-ಸಭೆಯ ಬಳಿಕ ಕುಂಟಿಕಾನ ಬಿಎಂಎಸ್ ಹೊಟೇಲಿನಲ್ಲಿ ಭೋಜನ ವ್ಯವಸ್ಥೆ ಮಾಡಲಾಗಿತ್ತು.
-ಆರು ಮಂದಿ ಸಂಘದ ಆಜೀವ ಸದಸ್ಯತ್ವ ಸ್ವೀಕರಿಸಿದರು. ಓರ್ವರು ವಾರ್ಷಿಕ ಸದಸ್ಯತ್ವ ಪಡೆದರು.
..................................

ಆಗಸ್ಟ್ 20ರಂದು ನಡೆದ ಈ ವಾರ್ಷಿಕ ಮಹಾಸಭೆಯ ನಿರ್ಣಯಗಳನ್ನು (ಮಿನಿಟ್ಸ್) ಯಥಾವತ್ತಾಗಿ ಪ್ರತ್ಯೇಕ ಪೋಸ್ಟ್ ರೂಪದಲ್ಲಿ ಈ ಬ್ಲಾಗಿನಲ್ಲಿ ಪ್ರಕಟಿಸಲಾಗುವುದು.
ಸಭೆಯ ಮುಖ್ಯ ನಿರ್ಣಯಗಳು ಈ ಕೆಳಗಿನಂತಿವೆ:


-ಮಾಮ್ ದತ್ತಿನಿಧಿ ರೂಪದಲ್ಲಿ ರು.1 ಲಕ್ಷಗಳನ್ನು ನಿರಖು ಠೇವಣಿಯಾಗಿ ಇರಿಸಿದ್ದು, ಇದರ ಬಡ್ಡಿಯ ಹಣ ಹಾಗೂ ಪ್ರಾಯೋಜಕರ ನೆರವಿನಿಂದ ನೀಡಲಾಗುವ ದತ್ತಿನಿಧಿ ಪುರಸ್ಕಾರಕ್ಕೆ ಮಾಮ್ ಇನ್ ಸ್ಪೈರ್ ಅವಾರ್ಡ್ ಎಂದು ಹೆಸರಿಡಲು ನಿರ್ಧಾರಿಸಲಾಯಿತು.
-ಮಾಮ್ ಸಂಘಟನೆಯು ದತ್ತಿ ನಿಧಿ ರೂಪದಲ್ಲಿ ಪ್ರತಿ ವರ್ಷ ಮಂಗಳೂರು, ಉಡುಪಿ ಕೊಡಗು ಭಾಗದ ಇಬ್ಬರು ವಿದ್ಯಾರ್ಥಿಗಳಿಗೆ ಈ ಪ್ರಶಸ್ತಿ ನೀಡಲಿದೆ. ಮಂಗಳೂರು ವಿ.ವಿ. ಸೇರಿದಂತೆ ಪತ್ರಿಕೋದ್ಯಮ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಒಂದು ಹಾಗೂ ಪದವಿ ವಿಭಾಗದ ವಿದ್ಯಾರ್ಥಿಗಳಿಗೆ ಒಂದು ಪ್ರಶಸ್ತಿ ನೀಡಲಾಗುವುದು. ಇದಕ್ಕೋಸ್ಕರ ವಿದ್ಯಾರ್ಥಿಗಳ ಬರವಣಿಗೆ, ಸಾಂಸ್ಕೃತಿಕ ಸಾಧನೆ, ಕಲಿಕೆಯಲ್ಲಿ ಸಾಧನೆ ಸೇರಿದಂತೆ ಸರ್ವತೋಮುಖ ಪ್ರತಿಭೆಯನ್ನು ಪ್ರಶಸ್ತಿ ಆಯ್ಕೆ ಸಮಿತಿ ಗುರುತಿಸಿ ನಗದು ಪುರಸ್ಕಾರ ನೀಡಲಿದೆ. ಈ ಕುರಿತು ಅಗತ್ಯ ಸುತ್ತೋಲೆಗಳನ್ನು ಶಿಕ್ಷಣ ಸಂಸ್ಥೆಗಳಿಗೆ ಕಳುಹಿಸಲು ನಿರ್ಧರಿಸಲಾಯಿತು. ಈ ಪ್ರಶಸ್ತಿಯ ಪ್ರಕ್ರಿಯೆಗಳನ್ನು ಪೂರೈಸಲು ಪ್ರತ್ಯೇಕ ಕಾರ್ಯಕಾರಿ ಸಮಿತಿ ರಚಿಸಲಾಗುವುದು, ಇದರ ನೇತೃತ್ವವನ್ನು ಉಪಾಧ್ಯಕ್ಷ ಶರತ್ ಹೆಗ್ಡೆ ಕಡ್ತಲ ವಹಿಸುವರು. ಈ ಕಾರ್ಯಕಾರಿ ಸಮಿತಿಯು ಪ್ರಶಸ್ತಿ ಕುರಿತ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಭೆ ಅಂಗೀಕಾರ ಸೂಚಿಸಿತು.

-ಮಂಗಳೂರು ವಿ.ವಿ.ಯಲ್ಲಿ 1988ರಿಂದ ಸುಮಾರು 250ಕ್ಕೂ ಅಧಿಕ ವಿದ್ಯಾರ್ಥಿಗಳು ಪದವಿ ಪಡೆದು ಹೋಗಿದ್ದಾರೆ. ಆದರೆ ಮಾಮ್ ಸಂಘಟನೆಯ ಸದಸ್ಯರಾಗಿರುವವರು ಹಾಗೂ ಸಂಪರ್ಕಕ್ಕೆ ಸಿಕ್ಕಿರುವ ಸಂಖ್ಯೆ ತುಂಬಾ ಕಡಿಮೆ. ಈ ಹಿನ್ನೆಲೆಯಲ್ಲಿ ಎಂಸಿಜೆ ವಿಭಾಗ ಸಹಾಯದಿಂದ ಹಳೆ ವಿದ್ಯಾರ್ಥಿಗಳ ವಿಳಾಸ, ಸಂಪರ್ಕ ಸಂಖ್ಯೆಗಳನ್ನು ಪತ್ತೆಹಚ್ಚಿ ಪಟ್ಟಿ ತಯಾರಿಸುವುದು, ಹಾಗೂ ಸದಸ್ಯತ್ವ ಅಭಿಯಾನ ಕೈಗೊಳ್ಳಲು ನಿರ್ಧರಿಸಲಾಯಿತು.

-ಡಾ.ರೊನಾಲ್ಡ್ ಅನಿಲ್ ಫರ್ನಾಂಡಿಸ್ ಹಾಗೂ ವೇಣುವಿನೋದ್ ನೇತೃತ್ವದಲ್ಲಿ ಮಾಮ್ ಗೆ ಸ್ವಂತ ವೆಬ್ ಸೈಟ್ ರೂಪಿಸುವ ಕಾರ್ಯಕ್ಕೆ ಚಾಲನೆ ದೊರಕಿದ್ದು, ತಿಂಗಳೊಳಗೆ ಇದು ಕಾರ್ಯರೂಪಕ್ಕೆ ಬರುವ ನಿರೀಕ್ಷೆ ಇದೆ. ಈ ವೆಬ್ ಸೈಟ್ ಸಹಾಯದಿಂದ ಹಳೆ ವಿದ್ಯಾರ್ಥಿಗಳ ಸಂಘಟನೆ ಹಾಗೂ ಸಂಪರ್ಕಕ್ಕೆ ನಿರ್ಧರಿಸಲಾಯಿತು.

-ಈಗಾಗಲೇ ಮಾಮ್ ಬೆಂಗಳೂರು ಘಟಕವನ್ನು ಕಳೆದ ವರ್ಷ ಅಸ್ತಿತ್ವಕ್ಕೆ ತರಲಾಗಿದೆ. ಇದರ ಕಾರ್ಯಚಟುವಟಿಕೆಯನ್ನು ಚುರುಕುಗೊಳಿಸಲು ಅಲ್ಲಿನ ಪ್ರತಿನಿಧಿ ದೀಪಕ್ ನಾಯ್ಕ್ ನೇತೃತ್ವದಲ್ಲಿ ಶೀಘ್ರದಲ್ಲಿ ಸಭೆ ನಡೆಸಲು ನಿರ್ಧಾರ. ಮಂಗಳೂರು ಘಟಕದ ಪ್ರತಿನಿಧಿಗಳು ಬೆಂಗಳೂರಿಗೆ ತೆರಳಿ ಸದಸ್ಯತ್ವ ಅಭಿಯಾನ ನಡೆಸಲು ತೀರ್ಮಾನ.

-ಮಂಗಳೂರಿನ ಎರಡು ಕಾಲೇಜುಗಳ ಸಹಯೋಗದಲ್ಲಿ ವಿಶಿಷ್ಟವಾದ ಎರಡು ಕಾರ್ಯಕ್ರಮಗಳನ್ನು ನಡೆಸಲು ಸಭೆ ಅಂಗೀಕಾರ ನೀಡಿತು.

-ಮಂಗಳೂರು ಎಂಸಿಜೆ ವಿಭಾಗದಲ್ಲಿ ವರ್ಷಪೂರ್ತಿ ಮಾಮ್ ಸಂಪನ್ಮೂಲ ವ್ಯಕ್ತಿಗಳ ಸಹಯೋಗದಲ್ಲಿ ನಿರಂತರ ಕಾರ್ಯಾಗಾರಗಳನ್ನು  ನಡೆಸುವ ಕುರಿತು ಪ್ರೊ.ಜಿ.ಪಿ.ಶಿವರಾಂ ಅವರು ಸಮ್ಮತಿ ಸೂಚಿಸಿದ್ದು, ಮುಂದಿನ ದಿನಗಳಲ್ಲಿ ಈ ಕುರಿತು ಕಾರ್ಯಕ್ರಮಗಳನ್ನು ನಡೆಸಲು ನಿರ್ಧಾರ.

-ಮಂಗಳಾ ಅಲ್ಯೂಮ್ನಿ ಅಸೋಸಿಯೇಶನ್ (MAA) ಸಹಯೋಗದಲ್ಲಿ ಕಾರ್ಯಕ್ರಮ ನಡೆಸಲು ಸಭೆ ಅಂಗೀಕಾರ.

-ರು.5000 ಸಾವಿರ ವರೆಗಿನ ನಗದನ್ನು ಕೋಶಾಧಿಕಾರಿ ಇರಿಸಿಕೊಂಡು ಸಣ್ಣಪುಟ್ಟ ಖರ್ಚುಗಳನ್ನು ನಗದು ರೂಪದಲ್ಲಿ ಹಾಗೂ ರು.1000ಕ್ಕಿಂತ ಮೇಲ್ಪಟ್ಟ ಪಾವತಿಗಳನ್ನು ಚೆಕ್ ರೂಪದಲ್ಲಿ ಮಾತ್ರ ಮಾಡಲು ಸಭೆ ನಿರ್ಧರಿಸಿತು. ಎಲ್ಲಾ ಪಾವತಿ, ಸ್ವೀಕೃತಿ ವ್ಯವಹಾರಗಳು ಬ್ಯಾಂಕ್ ಮೂಲಕವೇ ನಡೆಯಲಿದೆ.

-ಸದಸ್ಯತ್ವ ಶುಲ್ಕವನ್ನು ಯಾವುದೇ ಖರ್ಚಿಗೆ ಬಳಸದಿರಲು ಹಾಗೂ ಸದಸ್ಯತ್ವ ಶುಲ್ಕದ ಬಡ್ಡಿ ಹಣವನ್ನು ಮಾತ್ರ ಉಳಿತಾಯ ಖಾತೆ ಮೂಲಕ ಬಳಸಿಕೊಳ್ಳಲು ಸಭೆ ನಿರ್ಧರಿಸಿತು.
--------------------------------
ಸಭೆಯಲ್ಲಿ ಗೌರವಾಧ್ಯಕ್ಷ ವೇಣು ಶರ್ಮ, ಉಪಾಧ್ಯಕ್ಷ  ಡಾ.ರೊನಾಲ್ಡ್ ಅನಿಲ್ ಫೆರ್ನಾಂಡಿಸ್, ಕಾರ್ಯಕ್ರಮ ಸಂಘಟಕ ಕೃಷ್ಣ ಕಿಶೋರ್, ಕಾರ್ಯಕಾರಿ ಸಮಿತಿ ಸದಸ್ಯರಾದ ಹರೀಶ್ ಕುಲ್ಕುಂದ, ಹರೀಶ್ ಮೋಟುಕಾನ, ಸುರೇಶ್ ಡಿ.ಪಳ್ಳಿ, ಬಾಲಕೃಷ್ಣ ಹೊಳ್ಳ, ಸದಸ್ಯರಾದ ಗುರುರಾಜ್ ಪಣಿಯಾಡಿ, ವಸಂತ ಕೊಣಾಜೆ, ಮೋಹನ್, ಧೀರಜ್, ಪ್ರಶಾಂತ್ ಸುವರ್ಣ, ಕೆವಿನ್ ಮೆಂಡೋನ್ಸಾ, ಚೈತ್ರೇಶ್, ಚಂದ್ರಶೇಖರ ಕುಳಮರ್ವ ಮತ್ತಿತರರು ಹಾಜರಿದ್ದರು.
ಈ ಪೈಕಿ ದೂರದ ಕೊಪ್ಪಳದಿಂದ ಬಂದ ಶರತ್ ಹೆಗ್ಡೆ ಹಾಗೂ ಬೆಂಗಳೂರಿನಿಂದ ಸಭೆಗೆಂದೇ ಬಂದ ದೀಪಕ್ ನಾಯ್ಕ್, ಮಣಿಪಾಲದಿಂದ ಬಂದ ಬಾಲಕೃಷ್ಣ ಹೊಳ್ಳ ಅವರು ಗಮನ ಸೆಳೆದರು.
 ----------------------------------

PHOTO GALLERY
 









































-KM (ಪ್ರಧಾನ ಕಾರ್ಯದರ್ಶಿ, ಫೋಟೊ ಕೃಪೆ: ಮಾಮ್ ಸ್ನೇಹಿತರು)