Thursday, 22 October 2015

ಮಾಮ್ ರಕ್ತದಾನ ಅಭಿಯಾನ 7ನೇ ಶಿಬಿರ 24ರಂದು


ಮಂಗಳೂರು: ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (ಮಾಮ್) ರಕ್ತದಾನ ಅಭಿಯಾನ ಸರಣಿಯ ಏಳನೇ ಶಿಬಿರ ಅ.24ರಂದು ಶನಿವಾರ ಮೇರಿಹಿಲ್ ಲ್ಯಾಂಡ್ ಲಿಂಕ್ಸ್‌ನ ಲ್ಯಾಂಡ್ ಲಿಂಕ್ಸ್ ಎಲೈಟ್ಅಪಾರ್ಟ್‌ಮೆಂಟ್ ಆವರಣದಲ್ಲಿ ನಡೆಯಲಿದೆ. ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಮಂಗಳೂರು ಘಟಕದ ನೇತೃತ್ವದಲ್ಲಿ ನಡೆಯುವ ಶಿಬಿರಕ್ಕೆ ಲ್ಯಾಂಡ್ ಲಿಂಕ್ಸ್ ಎಲೈಟ್ ಅಪಾರ್ಟ್‌ಮೆಂಟ್ ಓನರ್ಸ್ ಅಸೋಸಿಯೇಶನ್ ಸಹಯೋಗ ನೀಡಲಿದೆ.

ಅಂದು ಬೆಳಗ್ಗೆ 9 ಗಂಟೆಗೆ ಆರಂಭವಾಗುವ ಶಿಬಿರವನ್ನು ಮಾಜಿ ಸಚಿವ ಜೆ.ಕೃಷ್ಣ ಪಾಲೇಮಾರ್ ಉದ್ಘಾಟಿಸುವರು. ಅಪಾರ್ಟ್‌ಮೆಂಟ್ ಓನರ್ಸ್ ಅಸೋಸಿಯೇಶನ್ ಅಧ್ಯಕ್ಷ ಶರತ್ ಶೆಟ್ಟಿ, ರೆಡ್‌ಕ್ರಾಸ್ ಸೊಸೈಟಿ ಮಂಗಳೂರು ಘಟಕ ಅಧ್ಯಕ್ಷ ಡಾ.ರೊನಾಲ್ಡ್ ಅನಿಲ್ ಫರ್ನಾಂಡಿಸ್ ಮತ್ತಿತರರು ಪಾಲ್ಗೊಳ್ಳುವರು. ಮಾಮ್ ಸಹಯೋಗದಲ್ಲಿ ನಗರದ ವಿವಿಧೆಡೆ ಈಗಾಗಲೇ ಆರು ರಕ್ತದಾನ ಶಿಬಿರಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. ಎಂದು ಮಾಮ್ ಅಧ್ಯಕ್ಷೆ ಫ್ಲೋರಿನ್ ರೋಚ್ ಪ್ರಕಟಣೆ ತಿಳಿಸಿದೆ.

MAAM TREKKING/ ANNUAL GET TOGETHER

ಆತ್ಮೀಯ ಸ್ನೇಹಿತರೇ,

ಕಳೆದ ವರ್ಷ ಡಿ.26ರಂದು, ಎಂಸಿಜೆ ವಿಭಾಗಕ್ಕೆ 25 ವರ್ಷ ತುಂಬಿದ ಸಂಭ್ರಮವನ್ನು ನಾವು ಹಳೆ ವಿದ್ಯಾರ್ಥಿಗಳು ವಿ.ವಿ.ಯಲ್ಲಿ ಆಚರಿಸಿಕೊಂಡು ಮಾಮ್ ಸಂಘಟನೆ ರಚಿಸಿಕೊಂಡೆವು. ಬಳಿಕ ಯಾವೆಲ್ಲಾ ಚಟುವಟಿಕೆಗಳು ನಡೆದಿವೆ ಎಂಬುದು ನಿಮಗೆ ಗೊತ್ತೇ ಇದೆ. ಇಂದು ನಮ್ಮ ಮೂರು ವಾಟ್ಸಾಪ್ ಗ್ರೂಪುಗಳಲ್ಲಿ 150ಕ್ಕೂ ಅಧಿಕ ಹಳೆ ವಿದ್ಯಾರ್ಥಿಗಳು ನಮ್ಮ ಜೊತೆಗಿದ್ದಾರೆ. ಸುಮಾರು 30 ಮಂದಿ ಶುಲ್ಕ ಪಾವತಿಸಿ ನಮ್ಮ ಸದಸ್ಯರಾಗಿದ್ದಾರೆ. ಮಾಮ್ ಸ್ಥಾಪನೆಯಾಗಿ ಒಂದು ವರ್ಷ ಪೂರೈಸುತ್ತಿದೆ. ಈ ಹಿನ್ನೆಲೆಯಲ್ಲಿ ನಾವು ಎರಡು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ.
1) ಮಾಮ್ ವಾರ್ಷಿಕೋತ್ಸವ ಅಥವಾ ಗೆಟ್ ಟುಗೆದರ್ (ಸಂತೋಷ ಕೂಟ)
2) ಮಾಮ್ ಸದಸ್ಯರೊಂದಿಗೆ ಕಿರು ಚಾರಣ ಅಥವಾ ಪ್ರವಾಸ (ಮಂಗಳೂರು ಸೆಂಟರ್ ಆಗಿರಿಸಿಕೊಂಡು)

ಮುಂದಿನ ಡಿಸೆಂಬರ್ ನಲ್ಲಿ ಒಂದು ಸಂಜೆ ವಾರ್ಷಿಕ ಗೆಟ್ ಟುಗೆದರ್ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ದಿನಾಂಕ ಹಾಗೂ ಸ್ಥಳ ನಿಗದಿಯಾದ ತಕ್ಷಣ ತಿಳಿಸಲಾಗುವುದು.

ನವೆಂಬರ್ ನಲ್ಲಿ ಕಿರುಚಾರಣ (ಸಣ್ಣ ಮಟ್ಟಿನ ಪ್ರವಾಸ) ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ನಮ್ಮ ಗ್ರೂಪಿನಲ್ಲಿ ಯಾರಿಗೆಲ್ಲಾ ಸಾಧ್ಯವಾಗುತ್ತದೋ ಅವರಿಗೆಲ್ಲ ಮುಕ್ತ ಸ್ವಾಗತವಿದೆ.

ಮಂಗಳೂರಿನಿಂದ ಪ್ರವಾಸ ಆರಂಭ. ಸ್ಥಳ ಹಾಗೂ ದಿನಾಂಕ ನಿಗದಿಯಾಗಿಲ್ಲ. ಬಹುತೇಕ ನವೆಂಬರ್ ದ್ವಿತೀಯಾರ್ಧದಲ್ಲಿ ಇರಬಹುದು. ಈ ರೀತಿ ಪ್ರವಾಸಕ್ಕೆ ಹೋಗುವುದಾದರೆ ಎಷ್ಟು ಮಂದಿಗೆ ಪಾಲ್ಗೊಳ್ಳಲು ಆಸಕ್ತಿ ಇದೆ ಎಂದು ದಯವಿಟ್ಟು ತಿಳಿಸಿ. ಒಟ್ಟು ಪ್ರವಾಸಿಗರ ಸಂಖ್ಯೆ ಆಧರಿಸಿ ವಾಹನ, ವಸತಿ ಇತ್ಯಾದಿ ವ್ಯವಸ್ಥೆ ಕುರಿತು ಚಿಂತಿಸಬೇಕಾಗುತ್ತದೆ. ಆದ್ದರಿಂದ ದಯವಿಟ್ಟು ಯಾರೆಲ್ಲಾ ಪ್ರವಾಸದಲ್ಲಿ ಪಾಲ್ಗೊಳ್ಳಬಯಸುತ್ತೀರೋ ನನಗೊಂದು ಮೆಸೇಜ್ ಕಳುಹಿಸಿ (9481976969). ಇದು ಅಂತಿಮ ಬುಕಿಂಗ್ ಅಲ್ಲ. ಎಷ್ಟು ಮಂದಿಗೆ ಪಾಲ್ಗೊಳ್ಳಲು ಆಸಕ್ತಿ, ಸಮಯಾವಕಾಶ ಇದೆ ಎಂದು ತಿಳಿಯುವ ಪ್ರಯತ್ನ. ಮುಂದಿನ ನಾಲ್ಕು ದಿನದೊಳಗೆ ಮೆಸೇಜ್ ಕಳುಹಿಸಿ ಅಥವಾ reachtomaam@gmail.com ಐಡಿಗೆ ಮೈಲ್ ಮಾಡಿ.

ಪ್ರವಾಸ ಹಾಗೂ ವಾರ್ಷಿಕ ಗೆಟ್ ಟುಗೆದರ್ ನಮ್ಮೊಳಗೆ ಪರಸ್ಪರ ಪರಿಚಯ ಹಾಗೂ ಸಂಘಟನೆ ಬಲಪಡಿಸಲು ಸಹಕಾರಿ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ. ಈ ಎರಡೂ ಕಾರ್ಯಕ್ರಮಗಳ ಹೆಚ್ಚನ ವಿವರಗಳನ್ನು ಮುಂದೆ ವಾಟ್ಸಾಪ್ ಗ್ರೂಪ್ ಹಾಗೂ ಬ್ಲಾಗ್ ನಲ್ಲಿ ಪ್ರಕಟಿಸಲಾಗುವುದು.

ಬೆಂಗಳೂರನಲ್ಲಿರುವವರು ಸಮಯಾವಕಾಶ ಇದ್ದರೆ ಅಲ್ಲಿ ಪ್ರತ್ಯೇಕ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡು ಆ ಮೂಲಕ ಸಂಘಟನೆ ಬಲಪಡಿಸುವ ಪ್ರಯತ್ನ ಮಾಡಬಹುದು.
-ಕೆಎಂ (ಪ್ರಧಾನ ಕಾರ್ಯದರ್ಶಿ).




Dear friends

As you are aware Media Alumni Association of Mangalagangotri (MAAM) was formed in December 2014 to commemorate the MCJ department of Mangalore University completing 25 years of its fruitful existence.   It is a matter of great satisfaction to know that since its inception MAAM has actively; involved in many activities about which we have kept all our members informed from time to time.  We could do these with the active support and cooperation of our members.    
We have more than 150 alumni  in  the various MAAm Whatsapp groups created for the purpose.  About 30 members have become members by paying the membership fee and we wish more members would enrol with us in the days to come.   Now that MAAM is completing one year  we have chalked out two programmes to mark the first anniversary.
·         MAAM 1st Anniversary or get-together
·         A one day trekking or tour

We have decided to hold the get-together in December this year and the date and place of this will be  communicated to you  once the same is finalised.
However a tour or easy trek is planned for the month of November and all MAAM members  are welcome to  take part in it.  Most probably this will be  held in the second half of November this year. 
  Those who are interested to be a part of this fun loving tour are requested to kindly confirm their participation  through SMS or Whatsapp to mobile number 9481976969 (KM) within the next 4 days.  Though this is not the final date for booking your participation it would help us to know how many are  interested in participating so that we can go ahead with the initial preparation.  You can also confirm your participation by reaching out to reachtomaam@gmail.com.
This is a small effort on our part to  strengthen MAAM and also  to encourage MAAM members to know one another and encourage more interaction among members.  More information about these two programmes will be intimated to members through Whatsapp group and through our blog.  
Members of Bangalore chapter of MAAM are free to join with us  or arrange a separate tour and strengthen the Bangalore chapter.  
-KM
Organising Secretary


Sunday, 18 October 2015

ಕೂಡ್ಲು : ಮಾಮ್ ರಕ್ತದಾನ ಅಭಿಯಾನ 6ನೇ ಶಿಬಿರ ಸಂಪನ್ನ 18, ಸೆಪ್ಟೆಂಬರ್‌ 2015


ಕಾಸರಗೋಡು: ಕಾಸರಗೋಡಿನಾದ್ಯಂತ ಇಂದಿಗೂ ಕೆಲ ಸಮುದಾಯಗಳು ಇತರ ಸಮುದಾಯಗಳಿಂದ ಬೇರ್ಪಟ್ಟು ಜೀವಿಸುತ್ತಿವೆ. ಎಲ್ಲ ಸಮುದಾಯಗಳು ಹಾಗೂ ಸಮಾಜದ ಎಲ್ಲ ಸ್ತರಗಳ ಜನರನ್ನು ಒಗ್ಗೂಡಿಸುವ ಪ್ರಯತ್ನ ಸಂಘ-ಸಂಸ್ಥೆಗಳಿಂದ ನಡೆಯಬೇಕು ಎಂದು ಕಾಸರಗೋಡು ಡಿವೈಎಸ್‌ಪಿ ಎಂ.ವಿ. ಸುಕುಮಾರನ್ ಹೇಳಿದರು.
ಕಾಸರಗೋಡು ಮೈತ್ರಿ ಸೋಶಿಯಲ್ ವರ್ಕ್ ಮತ್ತು ಕಲ್ಚರಲ್ ಸೆಂಟರ್, ಜಯನಗರ ಉಪ್ಪಂಗಳ ಟ್ರಸ್ಟ್ ಹಾಗೂ ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (ಮಾಮ್) ಮತ್ತು ರೆಡ್‌ಕ್ರಾಸ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಭಾನುವಾರ ಕೂಡ್ಲು  ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ ಜರಗಿದ ‘ಮಾಮ್ ರಕ್ತದಾನ ಅಭಿಯಾನ’ದ ಆರನೇ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉಪ್ಪಂಗಳ ಟ್ರಸ್ಟ್‌ನ ಸದಸ್ಯ, ಮಾಮ್ ಗೌರವಾಧ್ಯಕ್ಷ ವೇಣು ಶರ್ಮ ಅಧ್ಯಕ್ಷತೆೆ ವಹಿಸಿದ್ದರು. ಮಾಮ್ ಸದಸ್ಯ ಹಾಗೂ ಛಾಯಾಗ್ರಾಹಕ ಕೃಷ್ಣ ಕಿಶೋರ್, ಮೈತ್ರಿ ಸೋಶಿಯಲ್ ವರ್ಕ್ ಮತ್ತು ಕಲ್ಚರಲ್ ಸೆಂಟರ್‌ನ ಪದಾಧಿಕಾರಿ ಶರತ್ ಕುಮಾರ್ ನಾಯ್ಕ್, ರಾಮದಾಸನಗರ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ  ಶ್ರೀಧರ ಕೂಡ್ಲು, ಸಿಪಿಸಿಆರ್‌ಐ ಅಧಿಕಾರಿ ಶ್ಯಾಂ ಪ್ರಸಾದ್ ಕುಂಚಿನಡ್ಕ, ಉಪ್ಪಂಗಳ ಟ್ರಸ್ಟ್‌ನ ರಂಗಾ ಶರ್ಮಾ ಉಪ್ಪಂಗಳ ಇದ್ದರು.
ಮಂಗಳೂರು ರೆಡ್‌ಕ್ರಾಸ್ ಘಟಕ ಅಧ್ಯಕ್ಷ ಡಾ. ರೋನಾಲ್ಡ್ ಅನಿಲ್ ಫರ್ನಾಂಡಿಸ್, ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ವರದಿ: ಸಾಯಿಭದ್ರಾ ರೈ

ಕಾಸರಗೋಡು ಡಿವೈಎಸ್‌ಪಿ ಎಂ.ವಿ. ಸುಕುಮಾರನ್ ಅವರಿಂದ ‘ಮಾಮ್ ರಕ್ತದಾನ ಅಭಿಯಾನ’ದ ಆರನೇ ಶಿಬಿರ ಉದ್ಘಾಟನೆ.

ರಕ್ತದಾನ

ಡಾ.ರೊನಾಲ್ಡ್‌ ಅನಿಲ್‌ ಫೆರ್ನಾಂಡಿಸ್‌, ಶ್ಯಾಮ್‌ ಪ್ರಸಾದ್‌ ಕುಂಚಿನಡ್ಕ, ವೇಣು ಶರ್ಮಾ


ಕೃಷ್ಣ ಕಿಶೋರ್‌, ಶ್ಯಾಮ್‌ ಪ್ರಸಾದ್‌, ಸಾಯಿಭದ್ರಾ ರೈ



Saturday, 17 October 2015

6th BLOOD DONATION CAMP @ KUDLU ( KASARAGODU) on 18th OCTOBER, 2015









MAAM 6th blood donation camp in association with redcross and  uppangala trust @ koodlu, kasargod on 18th October, 2015
Thanx to Saibhadra Rai (vijaykarnataka) And Shyam.kunchinadka (CPCRI)
From maam working committe side Rony, Venu sharma and kishore are in picture.

ಉಜಿರೆ ಎಸ್ ಡಿ ಎಂ ಕಾಲೇಜಿನಲ್ಲಿ ಮಾಮ್ ಸಹಯೋಗದ ಮಾಧ್ಯಮ ಕಾರ್ಯಾಗಾರ








ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (ಮಾಮ್) ಹಾಗೂ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಉಜಿರೆ ಎಸ್ಡಿಎಂ ಕಾಲೇಜಿನ ಮೀಡಿಯಾ ಮೆಸೆಂಜರ್ಸ್ ಕ್ಲಬ್ ಸಹಯೋಗದಲ್ಲಿ ಶನಿವಾರ, ಅ.17ರಂದು ಕಾಲೇಜಿನ ಸ್ನಾತಕೋತ್ತರ ವಿಭಾಗದ ಸಭಾಂಗಣದಲ್ಲಿ ರೈಟಿಂಗ್ ಫಾರ್ ರೇಡಿಯೋ ವಿಚಾರದಲ್ಲಿ ಒಂದು ದಿನದ ವಿಚಾರ ಸಂಕಿರಣ ನಡೆಯಿತು.
ಉಜಿರೆ ಎಸ್ಡಿಎಂ ಕಾಲೇಜ್ ಪೋಸ್ಟ್ ಗ್ರಾಜ್ಯುವೇಶನ್ ಸೆಂಟರ್ ನ ಡೀನ್ ಡಾ.ಎಂ.ವೈ.ಮಂಜುಳಾ ಕಾರ್ಯಾಗಾರ ಉದ್ಘಾಟಿಸಿದರು. ಎಂಸಿಜೆ ವಿಭಾಗ ಮುಖ್ಯಸ್ಥ ಪ್ರೊ.ಭಾಸ್ಕರ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. 

ರೇಡಿಯೊದಲ್ಲಿ ಕಾರ್ಯಕ್ರಮ ನೀಡುವ ಸಂದರ್ಭ ಬಳಸುವ ಪ್ರತಿ ವಾಕ್ಯ, ಪದಗಳು ಧನಾತ್ಮಕವಾಗಿರಬೇಕಲ್ಲದೆ, ಜವಾಬ್ದಾರಿಯುತವಾಗಿರಬೇಕು ಎಂದು ಡಾ.ಮಂಜುಳಾ ಕಿವಿಮಾತು ಹೇಳಿದರೆ, ವಿಭಾಗದ ಮುಂದಿನ ಕಾರ್ಯಕ್ರಮಗಳಲ್ಲೂ ಮಾಮ್ ಸಹಭಾಗಿತ್ವ ಬಯಸುವುದಾಗಿ ಪ್ರೊ.ಭಾಸ್ಕರ ಹೆಗಡೆ ಹೇಳಿದರು, ಮಾಮ್ ಚಟುವಟಿಕೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಮಾಮ್ ಅಧ್ಯಕ್ಷೆ ಫ್ಲೋರನ್ ರೋಚ್ ಹಾಗೂ ಗೌರವಾಧ್ಯಕ್ಷ ವೇಣು ಶರ್ಮ ಉದ್ಘಾಟನಾ ಸಮಾರಂಭದಲ್ಲಿ ಹಾಜರಿದ್ದು ಮಾಮ್ ಹಾಗೂ ರೇಡಿಯೋ ಮಹತ್ವ ಕುರಿತು ಮಾತನಾಡಿದರು. 
------------







ಬಳಿಕ ನಡೆದ ಕಾರ್ಯಾಗಾರದಲ್ಲಿ ರೇಡಿಯೊ ಸ್ಕ್ರಿಪ್ಟ್ ಬರವಣಿಗೆ ಕುರಿತು ಕೆ.ಎಂ.ಹಾಗೂ ರೇಡಿಯೊ ಕಾರ್ಯಕ್ರಮ ನಿರ್ಮಾಣ ಕುರಿತು ಫ್ಲೋರಿನ್ ರೋಚ್ ಮಾಹಿತಿ ನೀಡಿದರು. ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಜರಿದ್ದರು.
ಈ ಸಂದರ್ಭ ವಿದ್ಯಾರ್ಥಿಗಳಿಂದಲೇ ರೇಡಿಯೊ ಕಾರ್ಯಕ್ರಮ ಸ್ಕ್ರಿಪ್ಟ್ ಬರೆಯುವ ಕಿರು ಅಸೈನ್ ಮೆಂಟ್ ನೀಡಿ ಉತ್ತಮ ಬರಹ ನೀಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
-------------





ಅಪರಾಹ್ನ ಎಸ್ಡಿಎಂ ಕಾಲೇಜಿನ ನೂತನ ಸುಸಜ್ಜಿತ ರೇಡಿಯೊ ಸ್ಟುಡಿಯೋ ಸಂದರ್ಶಿಸಿ ವಿದ್ಯಾರ್ಥಿಗಳಿಗೆ ಸ್ಟುಡಿಯೊದಲ್ಲಿ ಕಾರ್ಯಕ್ರಮ ನಿರ್ಮಾಣ ಕುರಿತು ಪ್ರಾಥಮಿಕ ಮಾಹಿತಿ ವಿನಿಮಯ ನಡೆಸಲಾಯಿತು.
ಮಾಮ್ ಪ್ರತಿನಿಧಿಗಳಾದ ಕೃಷ್ಣಕಿಶೋರ್ ಹಾಗೂ ಸ್ಮಿತಾ ಶೆಣೈ ಹಾಜರಿದ್ದು ಮಾಹಿತಿ ನೀಡಿದರು.


---------------






ಮಾಮ್ ಸದಸ್ಯ ಹಾಗೂ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಉಪನ್ಯಾಸಕ ಪರಶುರಾಮ ಕಾಮತ್ ಅವರ ಸಂಯೋಜನೆಯಲ್ಲಿ ಸಹಕರಿಸಿದ್ದು, ಅವರ ಸಹಭಾಗಿತ್ವ ಹಾಗೂ ಎಸ್ಡಿಎಂ ಕಾಲೇಜಿನ ಎಂಸಿಜೆ ವಿಭಾಗದ ಶಿಕ್ಷಕವೃಂದ ಹಾಗೂ ವಿದ್ಯಾರ್ಥಿಗಳು ನೀಡಿದ ಅವಕಾಶವನ್ನು ಮಾಮ್ ಕೃತಜ್ಞತೆಯಿಂದ ಸ್ಮರಿಸುತ್ತಿದೆ.

PHOTOS: Kishore and KM

Thursday, 15 October 2015

MEDIA WORKSHOP @ SDM college Ujire in association with MAAM on 17th October


ಮಾಮ್ ರಕ್ತದಾನ ಅಭಿಯಾನ ಸರಣಿ 6ನೇ ಶಿಬಿರ 18ರಂದು



ಮಂಗಳೂರು-ಮೈತ್ರಿ ಸೋಶಿಯಲ್ ವರ್ಕ್ ಮತ್ತು ಕಲ್ಚರಲ್ ಸೆಂಟರ್, ಉಪ್ಪಂಗಳ ಟ್ರಸ್ಟ್ ಜಯನಗರ ಆಶ್ರಯದಲ್ಲಿ ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (ಮಾಮ್) ನೇತೃತ್ವದಲ್ಲಿ ರಕ್ತದಾನ ಅಭಿಯಾನ ಸರಣಿಯ ಆರನೇ ಶಿಬಿರ ಅ.18ರಂದು ಕೂಡ್ಲುವಿನಲ್ಲಿ ನಡೆಯಲಿದೆ.  ಅಂದು ಬೆಳಗ್ಗೆ 9.30ರಿಂದ ಕೂಡ್ಲು ಶ್ರೀ ಗೋಪಾಲಕೃಷ್ಣ ಹೈಸ್ಕೂಲ್ ಆವರಣದಲ್ಲಿ ನಡೆಯುವ ಶಿಬಿರಕ್ಕೆ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸಹಯೋಗ ನೀಡಲಿದೆ.
ಕಾಸರಗೋಡು ಡಿವೈಎಸ್ಪಿ ಟಿ.ಪಿ.ರಂಜಿತ್ ಕಾರ್ಯಕ್ರಮ ಉದ್ಘಾಟಿಸುವರು. ಸರ್ಕಲ್ ಇನ್ ಸ್ಪೆಕ್ಟರ್ ಸುಧಾಕರನ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ರಾಮದಾಸ ನಗರ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಶ್ರೀಧರ ಕೂಡ್ಲು, ಮಂಗಳೂರು ರೆಡ್ ಕ್ರಾಸ್ ರಕ್ತನಿಧಿ ಅಧ್ಯಕ್ಷ ಡಾ.ರೊನಾಲ್ಡ್ ಅನಿಲ್ ಫರ್ನಾಂಡಿಸ್ ಅಭ್ಯಾಗತರಾಗಿ ಪಾಲ್ಗೊಳ್ಳುವರು. ಸಜಂಗದ್ದೆ ಉಪ್ಪಂಗಳ ಟ್ರಸ್ಟ್ ಅಧ್ಯಕ್ಷ ಶ್ರೀಹರಿ ಭಟ್ ಅಧ್ಯಕ್ಷತೆ ವಹಿಸುವರು.
ಸಾರ್ವನಿಕರು, ಯುವಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಕ್ತದಾನ ಮಾಡಬಹುದು. ಮಾಮ್ ನೇತೃತ್ವದಲ್ಲಿ ಈಗಾಗಲೇ ಐದು ರಕ್ತದಾನ ಸರಣಿ ಶಿಬಿರಗಳು ನಡೆದಿದ್ದು ಮುಂದಿನ ಶಿಬಿರಗಳಲ್ಲಿ ಪಾಲ್ಗೊಳ್ಳುವವರು ಮಾಮ್ ಪದಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಮಾಮ್ ಅಧ್ಯಕ್ಷೆ ಫ್ಲೋರಿನ್ ರೋಚ್ ಪ್ರಕಟಣೆ ತಿಳಿಸಿದೆ.
HOSA DIGANTHA REPORT