Sunday, 19 February 2017

ಗೂಡಿಗೆ ಮರಳಿದ ಹಳೆ ವಿದ್ಯಾರ್ಥಿಗಳ ಕಲರವ...!























ಕಳೆದ ಭಾನುವಾರ (ಫೆ.19,2017) ಮಂಗಳೂರು ವಿ.ವಿ.ಯ ಮಂಗಳಾ ಆಡಿಟೋರಿಯಂ ಎಂಬ ಭವ್ಯ ದೈತ್ಯ ಸಭಾಂಗಣ ಭಾವನೆಗಳ ಸಂಗಮಕ್ಕೆ ಸಾಕ್ಷಿಯಾಗಿತ್ತು. ಎಂದಿನಂತೆ ಆದಿತ್ಯವಾರದ ರಜಾದ ಮೂಡ್ ಅಲ್ಲಿರಲಿಲ್ಲ. ಅಸಹನೀಯ ಮೌನ ಕಾಲ್ಕಿತ್ತಿತ್ತು. ಶ್ವೇತ ಕಟ್ಟಡದ ಸುತ್ತಮುತ್ತ, ಒಳಗೆಲ್ಲಾ ಬಣ್ಣ ಬಣ್ಣದ ಉಡುಪು ತೊಟ್ಟು ಕುತೂಹಲ, ಮುಜುಗರ, ಹಳೆ ನೆನಪುಗಳು, ತುಸು ನಾಚಿಕೆಯಿಂದಲೇ ಬಂದ ಹಳೆ ವಿದ್ಯಾರ್ಥಿಗಳ ಭೇಟಿ, ಸಮಾವೇಶ, ಮಾತುಕತೆಗೆ ಸಾಕ್ಷಿಯಾಯಿತು ಮಂಗಳಾ ಸಭಾಂಗಣ. 


ಬರೋಬ್ಬರಿ 650ಕ್ಕೂ ಮಿಕ್ಕಿ ಮಂಗಳೂರ ವಿ.ವಿ.ಯ ವಿವಿಧ ಸ್ನಾತಕೋತ್ತರ ವಿಭಾಗಗಳ ಹಳೆ ವಿದ್ಯಾರ್ಥಿಗಳು ದೇಶದ ವಿವಿಧೆಡೆಗಳಿಂದ ಆಗಮಿಸಿದ್ದು ಮಾತ್ರವಲ್ಲದೆ ನೆನಪುಗಳನ್ನು ಬಿಚ್ಚಿಟ್ಟರು... ಮತ್ತೆ ಸೇರುವ ಮಾತನಾಡಿದರು... ಹಳೆ ಸಹಪಾಠಿಗಳ ಗುರುತಿಸಿ ಹರಟೆ ಹೊಡೆದು ರೋಮಾಂಚನಗೊಂಡರು. ಕಲಿತ ತರಗತಿಗೆ ಮತ್ತೆ ಭೇಟಿ ಕೊಟ್ಟು ಕ್ಲಾಸಿನಲ್ಲಿ ಕುಳಿತು ಮತ್ತೆ ವಿದ್ಯಾರ್ಥಿಯಾದೇನಾ ಎಂಬ ಕನವರಿಕೆ ಕಂಡು ಮತ್ತೆ ತಮ್ಮ ತಮ್ಮೂರಿಗೆ ಹೊರಟು ಹೋದರು... ಮತ್ತೊಮ್ಮೆ ಭೇಟಿಯಾಗಿ ಇನ್ನಷ್ಟು ಸಹಪಾಠಿಗಳೊಂದಿಗೆ ಮುಂದಿನ ವರ್ಷ ಬರುವ ಭರವಸೆಯೊಂದಿಗೆ...
ಅಂದ ಹಾಗೆ, ಸಂಗಮಾ ಹೆಸರಿನ ಈ ಹಳೆ ವಿದ್ಯಾರ್ಥಿಗಳ ಸಮಾವೇಶವನ್ನು ಆಯೋಜಿಸಿದ್ದು ಮಂಗಳೂರು ವಿ.ವಿ.ಸ್ನೋತಕೋತ್ತರ ಹಳೆ ವಿದ್ಯಾರ್ಥಿಗಳ ಸಂಘ (ಮಂಗಳಾ ಅಲ್ಯೂಮ್ನಿ ಅಸೋಸಿಯೇಶನ್) ಮಾ...
ಕಾರ್ಯಕ್ರಮದ ಪ್ರಚಾರ ಹಾಗೂ ಮಾಧ್ಯಮ ನಿರ್ವಹಣೆ ಹೊಣೆ ಹೊತ್ತಿದ್ದು ಪತ್ರಿಕೋದ್ಯಮ ವಿದ್ಯಾರ್ಥಿಗಳ ಹಳೆ ವಿದ್ಯಾರ್ಥಿಗಳ ಸಂಘ (ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶ್ ಆಫ್ ಮಂಗಳಗಂಗೋತ್ರಿ) ಮಾಮ್.

ಸುಮಾರು 1500 ಹಳೆ ವಿದ್ಯಾರ್ಥಿಗಳ ನಿರೀಕ್ಷೆಯಿತ್ತಾದರೂ ಅದರ ಸರಿಸುಮಾರು ಅರ್ಧದಷ್ಟು ಮಂದಿ ಆಗಮಿಸಿ ಪಾಲ್ಗೊಂಡು, ಹೆಸರು ನೋಂದಣಿ ಮಾಡಿಕೊಂಡರಲ್ಲದೆ, ಮಾ ಸಂಘಟನೆಯ ಸದಸ್ಯರೂ ಆದರು. ಮಧ್ಯಾಹ್ನ ಊಟದ ಬಳಿಕ ಆಯಾ ವಿಭಾಗಗಳಲ್ಲಿ ಅನೌಪಚಾರಿಕ ಸಭೆಗಳನ್ನು ನಡೆಸಿ ಸಂಘಟನೆ ಬೆಳೆಸುವ ಸಂಕಲ್ಪ ಕೈಗೊಂಡರು.
ಇದೇ ಸಮಾರಂಭದಲ್ಲಿ ನೂತನವಾಗಿ ರಾಜ್ಯಶಾಸ್ತ್ರ ವಿಭಾಗ ಹಾಗೂ ಯೋಗ ವಿಜ್ಞಾನ ವಿಭಾಗದವರ ಹಳೆ ವಿದ್ಯಾರ್ಥಿಗಳ ಸಂಘಗಳ ಉದ್ಘಾಟನೆಯೂ ನಡೆಯಿತು. 2014ರಲ್ಲಿ ಉದ್ಘಾಟನೆಗೊಂಡಿರುವ ಪತ್ರಿಕೋದ್ಯಮ ವಿದ್ಯಾರ್ಥಿಗಳ ಹಳೆ ವಿದ್ಯಾರ್ಥಿಗಳ ಸಂಘ ಮಾಮ್ ಇದರ ನೂತನ ವೆಬ್ ಸೈಟ್ ಅನಾವರಣವೂ ನಡೆಯಿತು.

ಹಳೆ ವಿದ್ಯಾರ್ಥಿಗಳದ ಶಾಸಕ ನಿಂಗಯ್ಯ, ಹಿರಿಯ ಅಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್, ವಿಶೇಷ ಸಾಮರ್ಥ್ಯದ ವಿದ್ಯಾರ್ಥಿನಿ ಇಂಗ್ಲಿಷ್ ವಿಭಾಗದ ಹಳೆ ವಿದ್ಯಾರ್ಥಿನಿ, ಉಪನ್ಯಾಸಕಿ ರಮ್ಯಾ ಐತಾಳ್ ಮತ್ತಿತರ ಭಾವುಕ ನುಡಿಗಳಿಗೆ ಪ್ರೇಕ್ಷಕರ ಕಣ್ಣುಗಳು ಹನಿಗೂಡಿದ್ದು ಸುಳ್ಳಲ್ಲ.

ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳ ಮೂಲಕ ಕಾರ್ಯಕ್ರಮಕ್ಕೆ ಬರಲಾಗದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದ ವಿವರ, ಚಿತ್ರ ಸರಣಿಗಳನ್ನು ಈ ಬ್ಲಾಗ್ ಮೂಲಕ ತಲುಪಿಸಲಿದ್ದು, ಮುಂದಿನ ಬಾರಿ ಇನ್ನಷ್ಟು ವಿದ್ಯಾರ್ಥಿಗಳು ಹಳೆ ವಿದ್ಯಾರ್ಥಿಗಳ ಸಂಘಟನೆ ಜೊತೆ ಕೈಜೋಡಿಸುವ ಭರವಸೆ ಸಂಘಟರಲ್ಲಿ ಖಂಡಿತಾ ಮೂಡಿದೆ.
-----------------------------------------------------
ವರದಿ: ಕೃಷ್ಣಮೋಹನ, ಸುರೇಶ್ ಪಳ್ಳಿ, 
ಫೋಟೋಸ್: ಕೃಷ್ಣಕಿಶೋರ್ ಏನಂಕೂಡ್ಲು
 
(ಸಮಾರಂಭದ ವರದಿ ಹಾಗೂ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳ ಮಾಹಿತಿಗೆ ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ)

http://maammangalore.blogspot.in/2017/02/blog-post_19.html

-----------------------------------
PHOTO GALLERY







































































PHOTOS: KRISHNAKOSHORE Y.

(For original quality photos please mail us:
reachtomaam.com)
call: 9448424922



No comments:

Post a Comment