Sunday, 19 February 2017

maammangalore.com ಅನಾವರಣ



ಮೀಡಿಯಾ ಅಲ್ಯೂಮ್ನಿ ಆಫ್ ಮಂಗಳಗಂಗೋತ್ರಿ (ಮಾಮ್) ಸಂಘಟನೆಯ ಬಹುದಿನದ ಕನಸು ನನಸಾಗಿದೆ. ನಮ್ಮದೇ ಆದ ವೆಬ್ ಸೈಟ್ maammangalore.com ಸಿದ್ಧಗೊಂಡು ಕಳೆದ ಫೆ.19, 2017ರಂದು ಮಂಗಳೂರು ವಿ.ವಿ.ಯಲ್ಲಿ ನಡೆದ ಹಳೆ ವಿದ್ಯಾರ್ಥಿಗಳ ಸಮಾವೇಶ ಸಂಗಮದ ಭವ್ಯ ವೇದಿಕೆಯಲ್ಲಿ ಲೋಕಾರ್ಪಣೆಗೊಂಡಿತು. ಮಾ ಅಧ್ಯಕ್ಷ ದಿನೇಶ್ ಕುಮಾರ್ ಆಳ್ವ ವೆಬ್ ಸೈಟಿಗೆ ಚಾಲನೆ ನೀಡಿದರು.
ಇದೇ ಸಂದರ್ಭ ವೇದಿಕೆಯಲ್ಲಿ ಈ ವರ್ಷದ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮಾಮ್ ಉಪಾಧ್ಯಕ್ಷ ಡಾ.ರೋನಾಲ್ಡ್ ಅನಿಲ್ ಫರ್ನಾಂಡಿಸ್ ಅವರನ್ನು ಗೌರವಿಸಲಾಯಿತು.
ಮಾಮ್ ಅಧ್ಯಕ್ಷೆ ಫ್ಲೋರಿನ್ ರೋಚ್ ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಕೃಷ್ಣಮೋಹನ ವಂದಿಸಿದರು.
ಸುಮಾರು 31 ಹಳೆ ವಿದ್ಯಾರ್ಥಿಗಳ ಮಾ ಸಂಗಮದಲ್ಲಿ ಪಾಲ್ಗೊಂಡಿದ್ದರು. ಎಂಸಿಜೆ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಜಿ.ಪಿ.ಶಿವರಾಂ, ಪ್ರಸ್ತುತ ವರ್ಷದ ಎಂಸಿಜೆ ವಿದ್ಯಾರ್ಥಿಗಳು  ಹಾಜರಿದ್ದರು.



ಈ ವೆಬ್ ಸೈಟ್ ವಿನ್ಯಾಸಗೊಳಿಸಿದವರು: ವಸಂತ ಕೇದಿಗೆ
ಉಸ್ತುವಾರಿ: ಡಾ.ರೊನಾಲ್ಡ್ ಅನಿಲ್ ಫರ್ನಾಂಡಿಸ್ ಹಾಗೂ ವೇಣುವಿನೋದ್ ಕೆ.ಎಸ್.

ಈ ವೆಬ್ ಸೈಟ್ ಮೂಲಕ ಆನ್ ಲೈನಿನಲ್ಲೇ ಸದಸ್ಯತ್ವ ಹೊಂದಲು ಅಕಾಶವಿದೆ, ಹಳೆ ಬ್ಲಾಗ್ ಲಿಂಕ್ ಕಲ್ಪಿಲಾಗಿದೆ, ಮಾಮ್ ಚಟುವಟಿಕೆಗಳ ವಿವರ ಮೂಡಿಬರಲಿದೆ.










ಅಪರಾಹ್ನದ ಭೋಜನದ ಬಳಿಕ ಎಂಸಿಜೆ ವಿಭಾಗದ ಸೆಮಿನಾರ್ ಹಾಲ್ ನಲ್ಲಿ ಹಳೆ ವಿದ್ಯಾರ್ಥಿಗಳ ಅನೌಪಚಾರಿಕ ಸಭೆ ನಡೆಯಿತು. ಪ್ರಸ್ತುತ ವರ್ಷದ ವಿದ್ಯಾರ್ಥಿಗಳೊಂದಿಗೆ ಸಂವಾದ, ಮುಂದಿನ ಚಟುವಟಿಕೆಗಳ ಕುರಿತು ಸಮಾಲೋಚನೆ ನಡೆಯಿತು. ಮಾಮ್ ಅಧ್ಯಕ್ಷ ಫ್ಲೋರಿನ್ ರೋಚ್ ಅಧ್ಯಕ್ಷತೆ ವಹಿಸಿದ್ದರು.


ಎಂಸಿಜೆ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ.ಜೆ.ಪಿ.ಶಿವರಾಂ, ಉದಯವಾಣಿ ಸಂಪಾದಕ ಎ.ವಿ.ಬಾಲಕೃಷ್ಣ ಹೊಳ್ಳ, ಪ್ರಧಾನ ಕಾರ್ಯದರ್ಶಿ ಕೃಷ್ಣಮೋಹನ, ಕೋಶಾಧಿಕಾರಿ ಸ್ಮಿತಾ ಶೆಣೈ, ಬೆಂಗಳೂರು ಪ್ರತಿನಿಧಿ ಸೂರ್ಯನಾರಾಯಣ ವಜ್ರಾಂಗಿ, ಉಪಾಧ್ಯಕ್ಷ ಶರತ್ ಹೆಗ್ಡೆ ಕಡ್ತಲ ಮತ್ತಿತರರು ಮಾತನಾಡಿದರು.













 
ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು:
-ಮುಂದೆ ಕೈಗೊಳ್ಳುವ ಮಾಮ್ ಪ್ರವಾಸದಲ್ಲಿ ಪ್ರಸ್ತುತ ದ್ವಿತೀಯ ವರ್ಷದ ವಿದ್ಯಾರ್ಥಿಗಳೂ ಪಾಲ್ಗೊಳ್ಳುವುದು.
-ವ್ಯಾಸಂಗ ಮುಗಿಸಿ ಹೊರಹೋಗುವ ವಿದ್ಯಾರ್ಥಿಗಳು ಮಾಮ್ ಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಳಿಸುವುದು.
-ಬೆಂಗಳೂರಿನಲ್ಲಿ ಮಾಮ್ ಚಾಪ್ಟರ್ ನ್ನು ಬಲಪಡಿಸುವುದು.
-ಸದಸ್ಯತ್ವ ಅಭಿಯಾನವನ್ನು ವೇಗಗೊಳಿಸುವುದು.



ಹೊಸದಾಗಿ ಈ ಬಾರಿ ನಾಲ್ವರು ಸದಸ್ಯರನ್ನು ಸೇರ್ಪಡೆಗೊಳಿಸಲಾಯಿತು.
-ಪ್ರಶಾಂತ್ ಬಿಸ್ಲೇರಿ (ಆಜೀವ ಸದಸ್ಯ)
-ಸಂದೀಪ್
-ನಿತೀಶ್ ಬೈಂದೂರು
-ಶಂಶೀರ್ ಬುಡೋಳಿ (ವಾರ್ಷಿಕ ಸದಸ್ಯರು)


-------------------------
ಸಂಗಮ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಾಮ್ ಅಲ್ಯೂಮ್ನಿಗಳು (32 ಮಂದಿ):

ನಿತೀಶ್ ಪಿ., 

ರಾಜು ಖಾರ್ವಿ, 
ಚೈತ್ರೇಶ್ ಸಿ., 
ಸುರೇಶ್ ಡಿ.ಪಳ್ಳಿ, 
ಫ್ಲೋರಿನ್ ರೋಚ್, 
ಕೃಷ್ಣಕಿಶೋರ್ ವೈ., 
ಕೃಷ್ಣಮೋಹನ, 
ಸೂರ್ಯನಾರಾಯಣ, 
ಡಾ.ರೊನಾಲ್ಡ್ ಅನಿಲ್ ಫರ್ನಾಂಡಿಸ್, 
ಎ.ವಿ.ಬಾಲಕೃಷ್ಣ ಹೊಳ್ಳ,
 ಸಂದೀಪ್, 
ಸ್ಮಿತಾ ಶೆಣೈ, 
ಅಶ್ವನಿ ಕುಮಾರ್, 
ವಸಂತ್ ಎನ್.ಕೊಣಾಜೆ, 
ಹರೀಶ್ ಮೋಟುಕಾನ, 
ಖಾದರ್ ಶಾ ಬಿ.ಎ., 
ಡಾ.ಪರಶುರಾಮ ಕಾಮತ್, 
ಶರತ್ ಹೆಗ್ಡೆ ಕಡ್ತಲ, 
ಸುಚಿತ್ ಕಿದಿಯೂರು, 
ಪ್ರಶಾಂತ್ ಬಿಸ್ಲೇರಿ, 
ಸಾಯಿಭದ್ರಾ ರೈ, 
ಮೋಹನ್ ಗೇರುಕಟ್ಟೆ, 
ಸರಿತಾ ಎಸ್., 
ನಮ್ರತಾ
ಶಿವರಂಜಿನಿ, 
ವಿದ್ಯಾಕುಮಾರಿ ಎಂ., 
ಕಿರಣ್ ಯು.ಸಿರ್ಸೀಕರ್, 
ಅಕ್ಷತಾ ವಿ.,
 ಗುರುರಾಜ್ ಪಣಿಯಾಡಿ, 
ಶಂಶೀರ್ ಬುಡೋಳಿ, 
ಚಂದ್ರಶೇಖರ ಕುಳಮರ್ವ, 
ವೇಣು ಶರ್ಮ.

No comments:

Post a Comment